Telegram Join WhatsApp Join

Namma metro mega project Bengaluru :ಬೆಂಗಳೂರು ನಮ್ಮ ಮೆಟ್ರೋ ಹೊಸ ಮಹಾಯೋಜನೆ – 73 ಕಿ.ಮೀ ಉದ್ದದ ಬೃಹತ್ ಮಾರ್ಗ! ದಕ್ಷಿಣ ಬೆಂಗಳೂರಿನಿಂದ ಪೂರ್ವ ಬೆಂಗಳೂರಿಗೆ ನೇರ ಸಂಪರ್ಕ

Namma metro mega project Bengaluru :ಬೆಂಗಳೂರು ನಮ್ಮ ಮೆಟ್ರೋ ಹೊಸ ಮಹಾಯೋಜನೆ – 73 ಕಿ.ಮೀ ಉದ್ದದ ಬೃಹತ್ ಮಾರ್ಗ! ದಕ್ಷಿಣ ಬೆಂಗಳೂರಿನಿಂದ ಪೂರ್ವ ಬೆಂಗಳೂರಿಗೆ ನೇರ ಸಂಪರ್ಕ

ಬೆಂಗಳೂರು ಅಂದ್ರೆ ಈಗ ಭಾರತದ ಐಟಿ ರಾಜಧಾನಿ ಅಂತಲೇ ಹೆಸರು ಮಾಡ್ಕೊಂಡಿರೋ ನಗರ. ದೇಶದ ಮೂಲೆ ಮೂಲೆಗಳಿಂದ ಮಾತ್ರ ಅಲ್ಲ, ವಿದೇಶಗಳಿಂದಲೂ ಸಾವಿರಾರು ಜನ ಇಲ್ಲಿ ಕೆಲಸಕ್ಕಾಗಿ, ಬಿಸಿನೆಸ್‌ಗಾಗಿ, ಶಿಕ್ಷಣಕ್ಕಾಗಿ ಬರ್ತಾ ಇದ್ದಾರೆ. ಆದ್ರೆ ಬೆಂಗಳೂರು ಎಷ್ಟು ವೇಗವಾಗಿ ಬೆಳೆಯ್ತಾ ಇದೆಯೋ, ಅದಕ್ಕಿಂತ ವೇಗವಾಗಿ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗ್ತಾ ಇದೆ. ಒಂದು ಕಡೆ ಹೊಸ ಹೊಸ ಕಂಪನಿಗಳು, ಇನ್ನೊಂದು ಕಡೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಐಟಿ ಪಾರ್ಕ್‌ಗಳು, ಇಂಡಸ್ಟ್ರಿಗಳು — ಇವೆಲ್ಲಾ ಅಭಿವೃದ್ಧಿ ಆಗ್ತಾ ಇದ್ದರೂ ರಸ್ತೆ ವ್ಯವಸ್ಥೆ ಮಾತ್ರ ಸಾಕಾಗ್ತಿಲ್ಲ ಅಂತ ಜನ ವರ್ಷಗಳಿಂದ ಬೇಸರ ಪಡ್ತಾ ಇದ್ದಾರೆ. ಒಂದು ಕಡೆ 10 ಕಿಲೋಮೀಟರ್ ಹೋಗೋಕೆ ಒಂದೂವರೆ ಗಂಟೆ ಬೇಕಾಗ್ತಾ ಇದೆ. ಕೆಲವೊಮ್ಮೆ ಜನ ಮನೆಗಿಂತ ರಸ್ತೆಯಲ್ಲೇ ಹೆಚ್ಚು ಸಮಯ ಕಳೆಯೋ ಪರಿಸ್ಥಿತಿ ಬಂದಿದೆ. ಇಂಥಾ ಸಮಯದಲ್ಲಿ ಬೆಂಗಳೂರಿನ ಜನಕ್ಕೆ ಈಗ ದೊಡ್ಡ ಗುಡ್‌ನ್ಯೂಸ್ ಸಿಕ್ಕಿದೆ. “ನಮ್ಮ ಮೆಟ್ರೋ” ಬೆಂಗಳೂರಿನ ಇತಿಹಾಸದಲ್ಲೇ ಅತಿ ದೊಡ್ಡ ಮತ್ತು ಅತಿ ಉದ್ದದ ಸಿಂಗಲ್ ಮೆಟ್ರೋ ಕಾರಿಡಾರ್ ನಿರ್ಮಿಸೋ ಭಾರೀ ಯೋಜನೆ ತಯಾರಿಸಿದೆ. ಈ ಯೋಜನೆ ಪೂರ್ಣ ಆದ್ರೆ ಬೆಂಗಳೂರಿನ ದಕ್ಷಿಣ ಭಾಗದಿಂದ ಪೂರ್ವ ಭಾಗಕ್ಕೆ ಪ್ರಯಾಣ ಮಾಡೋ ಜನರಿಗೆ ದೊಡ್ಡ ಮಟ್ಟದ ಸಹಾಯ ಆಗೋದು ಖಚಿತ ಅಂತ ಹೇಳಲಾಗ್ತಿದೆ.

ಇದನ್ನು ಓದಿ…👉RRB ALP, Indian Railways Vacancy 2026 for 10th ITI Diploma Candidates.

BMRCL Preparing Bengaluru’s Longest Single Metro Corridor Project : ಈ ಹೊಸ ಮಾರ್ಗ ಸಾಮಾನ್ಯ ಮೆಟ್ರೋ ಯೋಜನೆ ಅಲ್ಲಪ್ಪಾ… ಒಟ್ಟು ಸುಮಾರು 73 ಕಿಲೋಮೀಟರ್ ಉದ್ದದ ಬೃಹತ್ ಯೋಜನೆ ಇದು. ಈಗಾಗಲೇ ಇದರ ಕಾರ್ಯಸಾಧ್ಯತಾ ವರದಿ ಅಂದ್ರೆ feasibility report ಸಿದ್ಧ ಆಗಿದ್ದು, ಬಿಎಂಆರ್ಸಿಎಲ್ ಸರ್ಕಾರದ ಮುಂದೆ ಇಡೋ ಸಿದ್ಧತೆ ಮಾಡ್ಕೊಂಡಿದೆ. ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಹಿಡಿದು ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ ಈ ಹೊಸ ಮಾರ್ಗ ನಿರ್ಮಾಣ ಆಗೋದು. ಈಗಾಗಲೇ ಬೆಂಗಳೂರಿನಲ್ಲಿ ಗುಲಾಬಿ ಮಾರ್ಗ ಮತ್ತು ನೇರಳೆ ಮಾರ್ಗ ಜನರಿಗೆ ಸೇವೆ ಕೊಡ್ತಿವೆ. ಆ ಎರಡು ಮಾರ್ಗಗಳ ಕೊನೆಯ ಭಾಗಗಳನ್ನು ನೇರವಾಗಿ ಕನೆಕ್ಟ್ ಮಾಡೋದು ಈ ಯೋಜನೆಯ ಪ್ರಮುಖ ಉದ್ದೇಶ ಆಗಿದೆ. ಇದ್ರಿಂದ ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಜನ ಸುಲಭವಾಗಿ ಹೋಗೋ ಅವಕಾಶ ಸಿಗುತ್ತೆ. ಈಗ ಬಸ್, ಕಾರು, ಬೈಕ್‌ನಲ್ಲಿ ಗಂಟೆಗಟ್ಟಲೆ ಸಿಲುಕೊಂಡು ಹೋಗ್ತಿರೋ ಜನರಿಗೆ ಇದು ದೊಡ್ಡ ನಿರಾಳತೆ ಕೊಡೋ ಯೋಜನೆ ಅಂತ ಹೇಳಬಹುದು.




Join WhatsApp Channel 🔥 ಸರ್ಕಾರಿ ಯೋಜನೆಗಳು | ಉದ್ಯೋಗ ಮಾಹಿತಿ | Daily Updates

ಈ ಮಾರ್ಗ ಯಾವ ಯಾವ ಕಡೆ ಹಾದು ಹೋಗುತ್ತೆ ಅನ್ನೋದನ್ನ ಕೇಳಿದ್ರೆ ಜನ ಇನ್ನಷ್ಟು ಖುಷಿ ಆಗ್ತಾರೆ. ಯಾಕಂದ್ರೆ ಈ ಮಾರ್ಗ ಬೆಂಗಳೂರಿನ ವೇಗವಾಗಿ ಬೆಳೆಯ್ತಿರೋ ಪ್ರಮುಖ ಪ್ರದೇಶಗಳನ್ನು ಸಂಪರ್ಕ ಮಾಡೋ ಯೋಜನೆ ಹೊಂದಿದೆ. ಬನ್ನೇರುಘಟ್ಟ ರಸ್ತೆ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ, ವರ್ತೂರು ಕೋಡಿ ಇಂಥಾ ಭಾಗಗಳು ಈಗ ಬೆಂಗಳೂರಿನ ಹೊಸ ಐಟಿ ಮತ್ತು ಇಂಡಸ್ಟ್ರಿಯಲ್ ಹಬ್ ಆಗಿ ಬೆಳೆಯ್ತಿವೆ. ದೊಡ್ಡ ದೊಡ್ಡ ಕಂಪನಿಗಳು, ಟೆಕ್ ಪಾರ್ಕ್‌ಗಳು, ಫ್ಯಾಕ್ಟರಿಗಳು, ಗೇಟೆಡ್ ಕಮ್ಯುನಿಟಿಗಳು ಈ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಸಾವಿರಾರು ಜನ ದಿನವೂ ಇಲ್ಲಿ ಕೆಲಸಕ್ಕೆ ಹೋಗ್ತಾರೆ. ಆದ್ರೆ ರಸ್ತೆ ಟ್ರಾಫಿಕ್ ಮಾತ್ರ ಭಯಂಕರ ಮಟ್ಟಿಗೆ ಇದೆ. ಬೆಳಿಗ್ಗೆ ಆಫೀಸ್ ಟೈಮ್ ಮತ್ತು ಸಂಜೆ ಮನೆಗೆ ಬರೋ ಟೈಮ್‌ನಲ್ಲಿ ಜನ ನರಕ ಅನುಭವಿಸ್ತಾರೆ ಅಂತ ಹೇಳಿದ್ರೂ ತಪ್ಪಾಗಲ್ಲ. ಒಂದು ಕಡೆ ಹಾರ್ನ್ ಸೌಂಡ್‌, ಇನ್ನೊಂದು ಕಡೆ ಧೂಳು, ಹೊಗೆ, ಬಿಸಿಲು — ಜನ ಮಾನಸಿಕವಾಗಿ ಕೂಡ ಸುಸ್ತಾಗ್ತಾರೆ. ಈಗ ಈ ಹೊಸ ಮೆಟ್ರೋ ಮಾರ್ಗ ಬಂದ್ರೆ ಜನರಿಗೆ ಬಹಳಷ್ಟು ಸಮಯ ಉಳಿತಾಯ ಆಗುತ್ತೆ. ಆರಾಮವಾಗಿ, ಟ್ರಾಫಿಕ್ ಟೆನ್ಷನ್ ಇಲ್ಲದೇ ಪ್ರಯಾಣ ಮಾಡೋ ಅವಕಾಶ ಸಿಗುತ್ತೆ.

New Bengaluru Metro Project Could Transform Daily Commuting: ಈ ಯೋಜನೆಯ ಮತ್ತೊಂದು ದೊಡ್ಡ ವಿಶೇಷ ಏನಪ್ಪಾ ಅಂದ್ರೆ, ಇದು ಸಂಪೂರ್ಣ ಎಲಿವೇಟೆಡ್ ಮೆಟ್ರೋ ಮಾರ್ಗ ಆಗಿರುತ್ತೆ. ಅಂದ್ರೆ ರಸ್ತೆಯ ಮೇಲಿಂದ ಮೇಲ್ಸೇತುವೆ ರೀತಿಯಲ್ಲಿ ಮೆಟ್ರೋ ಓಡುತ್ತೆ. ಇದ್ರಿಂದ ರಸ್ತೆ ಮೇಲೆ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಕಡಿಮೆ ಆಗೋ ಸಾಧ್ಯತೆ ಇದೆ. ಅಂದಾಜು ಸುಮಾರು 50 ಮೆಟ್ರೋ ನಿಲ್ದಾಣಗಳು ಈ ಮಾರ್ಗದಲ್ಲಿ ಇರಲಿವೆ ಅಂತ ಹೇಳಲಾಗಿದೆ. ಅಂದ್ರೆ ಪ್ರತಿ ಪ್ರಮುಖ ಪ್ರದೇಶಕ್ಕೂ ಮೆಟ್ರೋ ಸೌಲಭ್ಯ ಸಿಗೋದು ಖಚಿತ. ಈಗ ಕಾರು, ಬೈಕ್ ಇಲ್ಲದವರು ತುಂಬಾ ಕಷ್ಟಪಟ್ಟು ಬಸ್‌ಗಾಗಿ ಕಾಯ್ಬೇಕು, ಆಟೋಗೆ ಜಾಸ್ತಿ ಹಣ ಕೊಡ್ಬೇಕು. ಆದ್ರೆ ಮೆಟ್ರೋ ಬಂದ್ರೆ ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ ಜನ ಪ್ರಯಾಣ ಮಾಡಬಹುದು.

ಇದನ್ನು ಓದಿ…👉Labour Card Scheme for Building Workers 2026: Benefits, Eligibility, Scholarship & Apply Process.

ಈ ಯೋಜನೆಗೆ ಸಂಬಂಧಪಟ್ಟ ಇನ್ನೊಂದು ದೊಡ್ಡ ಆಕರ್ಷಣೆ ಅಂದ್ರೆ, ಹೊಸ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೂ ನೇರ ಮೆಟ್ರೋ ಸಂಪರ್ಕ ಕೊಡೋ ಪ್ಲಾನ್ ಮಾಡಿದ್ದಾರೆ. ಆನೇಕಲ್ ತಾಲೂಕಿನ ಕಡೆ ನಿರ್ಮಾಣ ಆಗೋ ಉದ್ದೇಶಿತ ಸ್ಟೇಡಿಯಂಗೆ ಜನ ಸುಲಭವಾಗಿ ಹೋಗೋಕೆ ವಿಶೇಷ ಮಾರ್ಗ ಮಾಡೋ ಯೋಚನೆ ಇದೆ. ಜಿಗಣಿ ನಿಲ್ದಾಣದ ನಂತರ ಮೆಟ್ರೋ ಮಾರ್ಗ ಎರಡು ಭಾಗ ಆಗುತ್ತೆ. ಒಂದು ಮುಖ್ಯ ಮಾರ್ಗ ಮುಂದಕ್ಕೆ ಸಾಗಿದ್ರೆ, ಇನ್ನೊಂದು 5 ಕಿಲೋಮೀಟರ್ ಉದ್ದದ ಶಾಖೆ ಹೊಸ ಕ್ರಿಕೆಟ್ ಸ್ಟೇಡಿಯಂ ಕಡೆ ಹೋಗುತ್ತೆ. ಇದ್ರಲ್ಲಿ ಎರಡು ಹೊಸ ನಿಲ್ದಾಣಗಳಿರುತ್ತವೆ ಅಂತ ಮಾಹಿತಿ ಬಂದಿದೆ. ಒಂದೇ ನಿಲ್ದಾಣ ನೇರವಾಗಿ ಸ್ಟೇಡಿಯಂ ಹತ್ತಿರ ನಿರ್ಮಾಣ ಆಗುತ್ತೆ. ಪಂದ್ಯಗಳ ಸಮಯದಲ್ಲಿ ಸಾವಿರಾರು ಜನ ವಾಹನಗಳಲ್ಲಿ ಬರೋದು ಕಡಿಮೆ ಆಗಿ ಮೆಟ್ರೋ ಮೂಲಕ ಸುಲಭವಾಗಿ ಬರಬಹುದು. ಇನ್ನೊಂದು ನಿಲ್ದಾಣ ಇಂಡ್ಲವಾಡಿ ಗ್ರಾಮ ಹತ್ತಿರ ನಿರ್ಮಾಣ ಆಗಿ ಸುತ್ತಮುತ್ತಲಿನ ಹಳ್ಳಿಯ ಜನರಿಗೂ ಅನುಕೂಲ ಆಗುತ್ತೆ. ಅಂದ್ರೆ ಕೇವಲ ನಗರಾಭಿವೃದ್ಧಿ ಮಾತ್ರ ಅಲ್ಲ, ಗ್ರಾಮೀಣ ಭಾಗಕ್ಕೂ ಸಂಪರ್ಕ ಕಲ್ಪಿಸೋ ಪ್ರಯತ್ನ ಈ ಯೋಜನೆಯಲ್ಲಿ ಕಾಣ್ತಿದೆ.

ಈ ಯೋಜನೆ ಯಾವಾಗ ಆರಂಭ ಆಗುತ್ತೆ ಅನ್ನೋ ಪ್ರಶ್ನೆ ಈಗ ಬೆಂಗಳೂರಿನ ಜನರಲ್ಲೇ ಹೆಚ್ಚು ಚರ್ಚೆ ಆಗ್ತಿದೆ. ಸದ್ಯಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ಧ ಆಗಿದೆ. ಇದನ್ನ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತೆ. ಸರ್ಕಾರ ವರದಿ ಪರಿಶೀಲನೆ ಮಾಡಿದ ಮೇಲೆ Detailed Project Report ಅಂದ್ರೆ ಡಿಪಿಆರ್ ಸಿದ್ಧಪಡಿಸೋ ನಿರ್ಧಾರ ಮಾಡುತ್ತೆ. ಡಿಪಿಆರ್ ಸಿದ್ಧಪಡಿಸೋಕೆ ಸುಮಾರು ಒಂದು ವರ್ಷ ಬೇಕಾಗಬಹುದು ಅಂತ ಅಂದಾಜು ಮಾಡಲಾಗಿದೆ. ಅದಾದ್ಮೇಲೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಹಣಕಾಸು ಅನುಮತಿ, ಭೂಸ್ವಾಧೀನ, ಪರಿಸರ ಅನುಮತಿ ಇಂಥಾ ಹಲವಾರು ಹಂತಗಳಿರುತ್ತವೆ. ಇವೆಲ್ಲಾ ಪ್ರಕ್ರಿಯೆಗಳು ಮುಗಿದ ಮೇಲೆ ಮಾತ್ರ ಕಾಮಗಾರಿ ಶುರು ಆಗುತ್ತೆ. ಎಲ್ಲವೂ ಸರಿಯಾಗಿ ನಡೆದ್ರೆ 2029ರ ವೇಳೆಗೆ ಕಾಮಗಾರಿ ಆರಂಭ ಆಗೋ ಸಾಧ್ಯತೆ ಇದೆ ಅಂತ ಮೂಲಗಳು ಹೇಳುತ್ತಿವೆ. ಅಂದ್ರೆ ಜನ ಇನ್ನೂ ಸ್ವಲ್ಪ ವರ್ಷ ಕಾಯ್ಬೇಕಾದ್ರೂ, ಭವಿಷ್ಯದಲ್ಲಿ ದೊಡ್ಡ ಅನುಕೂಲ ಸಿಗೋದು ಖಚಿತ ಅಂತ ನಿರೀಕ್ಷೆ ಮಾಡ್ತಿದ್ದಾರೆ.




Join WhatsApp Group 🔥 ಸರ್ಕಾರಿ ಯೋಜನೆಗಳು | ಉದ್ಯೋಗ ಮಾಹಿತಿ | Daily Updates

ತಜ್ಞರ ಪ್ರಕಾರ ಈ ಯೋಜನೆ ಬೆಂಗಳೂರಿನ ಭವಿಷ್ಯವನ್ನೇ ಬದಲಾಯಿಸೋ ಸಾಮರ್ಥ್ಯ ಹೊಂದಿದೆ. ಯಾಕಂದ್ರೆ ಇವತ್ತು ಬೆಂಗಳೂರಿನ ಅಭಿವೃದ್ಧಿ ಕೇವಲ ಸಿಟಿ ಸೆಂಟರ್‌ನಲ್ಲಿ ಮಾತ್ರ ಆಗ್ತಿಲ್ಲ. ಹೊರವಲಯ ಭಾಗಗಳಾದ ಸರ್ಜಾಪುರ, ಅತ್ತಿಬೆಲೆ, ಜಿಗಣಿ, ವರ್ತೂರು ಕಡೆ ದೊಡ್ಡ ಮಟ್ಟದಲ್ಲಿ ಮನೆಗಳು, ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ನಿರ್ಮಾಣ ಆಗ್ತಿವೆ. ಮುಂದಿನ 10-15 ವರ್ಷಗಳಲ್ಲಿ ಈ ಭಾಗಗಳ ಜನಸಂಖ್ಯೆ ಇನ್ನಷ್ಟು ಜಾಸ್ತಿ ಆಗೋ ಸಾಧ್ಯತೆ ಇದೆ. ಈಗಲೇ ಮೆಟ್ರೋ ಸಂಪರ್ಕ ಕೊಟ್ಟರೆ ಭವಿಷ್ಯದ ಟ್ರಾಫಿಕ್ ಸಮಸ್ಯೆ ಬಹಳಷ್ಟು ಕಡಿಮೆ ಮಾಡಬಹುದು ಅಂತ ಯೋಜನೆ ರೂಪಿಸಲಾಗಿದೆ.

ಇದರ ನಡುವೆ ಮತ್ತೊಂದು ದೊಡ್ಡ ಚರ್ಚೆ ಆಗ್ತಿರೋ ವಿಷಯ ಅಂದ್ರೆ, ಬೊಮ್ಮಸಂದ್ರದಿಂದ ಹೊಸೂರುವರೆಗೆ ಮೆಟ್ರೋ ವಿಸ್ತರಣೆ. ತಮಿಳುನಾಡು ಸರ್ಕಾರ ಹೊಸೂರುವರೆಗೆ ಮೆಟ್ರೋ ತರೋ ಆಸಕ್ತಿ ತೋರಿದೆ. ಇದು ಜಾರಿಗೆ ಬಂದರೆ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ಆಗುತ್ತಿತ್ತು. ಆದ್ರೆ ಕರ್ನಾಟಕ ಸರ್ಕಾರ ಮತ್ತು ಬಿಎಂಆರ್ಸಿಎಲ್ ಈ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿಲ್ಲ ಅನ್ನೋ ಮಾಹಿತಿ ಬಂದಿದೆ. ಬದಲಾಗಿ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಮಾತ್ರ ವಿಸ್ತರಿಸೋ ಯೋಜನೆ ಮಾಡಿದ್ದಾರೆ. ಸುಮಾರು 11 ಕಿಲೋಮೀಟರ್ ಉದ್ದದ ಈ ವಿಸ್ತರಣೆಯಲ್ಲಿ 8 ಹೊಸ ನಿಲ್ದಾಣಗಳು ಇರೋ ಸಾಧ್ಯತೆ ಇದೆ.

ಹೊಸೂರುವರೆಗೆ ಮೆಟ್ರೋ ಯಾಕೆ ಹೋಗಲ್ಲ ಅನ್ನೋದಕ್ಕೂ ತಾಂತ್ರಿಕ ಕಾರಣಗಳಿವೆ. ತಮಿಳುನಾಡಿನ ಮೆಟ್ರೋ ವ್ಯವಸ್ಥೆ ಓವರ್‌ಹೆಡ್ ವಿದ್ಯುದೀಕರಣ ಬಳಸ್ತೆ. ಆದರೆ ಬೆಂಗಳೂರಿನ ನಮ್ಮ ಮೆಟ್ರೋ 750V DC ಥರ್ಡ್ ರೈಲ್ ಟ್ರ್ಯಾಕ್ಷನ್ ಸಿಸ್ಟಂ ಬಳಸ್ತೆ. ಈ ಎರಡು ತಂತ್ರಜ್ಞಾನಗಳನ್ನು ಒಂದೇ ಮಾರ್ಗದಲ್ಲಿ ಹೊಂದಿಸೋದು ತುಂಬಾ ಕಷ್ಟ. ಇದ್ರ ಜೊತೆಗೆ ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆ ಮೂಲಕ ಯೋಜನಾ ವ್ಯಾಪ್ತಿ ಬದಲಾವಣೆ ಮಾಡ್ಬೇಕಾಗುತ್ತೆ. ಅದು ಸಮಯ ತೆಗೆದುಕೊಳ್ಳೋ ದೀರ್ಘ ಪ್ರಕ್ರಿಯೆ ಆಗಿರೋದ್ರಿಂದ ಸದ್ಯಕ್ಕೆ ಹೊಸೂರು ಯೋಜನೆ ನಿಧಾನಗೊಂಡಿದೆ.

{ಪ್ರಮುಖ ಲಿಂಕ್‌ಗಳು} IMPORTENTS LINKS..👇👇👍
OFICIAL WEBSITE  CLICK HERE
WHAT’S APP GROUP CLICK HERE
YUTUBE CHANNEL CLICK HERE
INSTAGRAM LINK
CLICK HERE
WHAT’S APP CHANNEL CLICK HERE

 

ಒಟ್ಟಿನಲ್ಲಿ ಹೇಳ್ಬೇಕಂದ್ರೆ, ಬೆಂಗಳೂರಿನ ಜನ ವರ್ಷಗಳಿಂದ ಎದುರು ನೋಡ್ತಿರೋ ಟ್ರಾಫಿಕ್ ಸಮಸ್ಯೆಗೆ ಈಗ ದೊಡ್ಡ ಪರಿಹಾರ ಸಿಗೋ ನಿರೀಕ್ಷೆ ಮೂಡಿದೆ. ಈ 73 ಕಿಲೋಮೀಟರ್ ಉದ್ದದ ಹೊಸ ಮೆಟ್ರೋ ಮಾರ್ಗ ಕೇವಲ ರೈಲು ಮಾರ್ಗ ಅಲ್ಲ, ಇದು ಬೆಂಗಳೂರಿನ ಭವಿಷ್ಯದ ಅಭಿವೃದ್ಧಿಗೆ ದೊಡ್ಡ ಅಡಿಪಾಯ ಆಗಬಹುದು. ಜನರ ಸಮಯ ಉಳಿಸೋದು, ಟ್ರಾಫಿಕ್ ಕಡಿಮೆ ಮಾಡೋದು, ಮಾಲಿನ್ಯ ತಗ್ಗಿಸೋದು, ಹೊರವಲಯ ಪ್ರದೇಶಗಳ ಅಭಿವೃದ್ಧಿ ಹೆಚ್ಚಿಸೋದು — ಇವೆಲ್ಲಾ ಈ ಯೋಜನೆಯ ಪ್ರಮುಖ ಲಾಭಗಳು. ಮುಂದಿನ ದಿನಗಳಲ್ಲಿ ಬೆಂಗಳೂರು ಇನ್ನಷ್ಟು ವೇಗವಾಗಿ, ಆಧುನಿಕವಾಗಿ ಬೆಳೆಯೋ ನಗರ ಆಗೋದು ಖಚಿತ ಅನ್ನೋ ನಂಬಿಕೆ ಈಗ ಜನರಲ್ಲಿ ಹೆಚ್ಚಾಗಿದೆ.

            ದರ ನಿಯಮಗಳು

  • 3 ಅಡಿಗಿಂತ ಕಡಿಮೆ ಎತ್ತರ ಇರುವ ಪ್ರಯಾಣಿಕರಿಗೆ ಟಿಕೇಟುಗಳನ್ನು ಪಡೆಯುವ ಅಗತ್ಯವಿರುವುದಿಲ್ಲ.ವಯಸ್ಸಿನ ಮಾನದಂಡವನ್ನು ಪರಿಗಣಿಸುವುದಿಲ್ಲ.
  • ಸ್ವಯಂಚಾಲಿತ ದ್ವಾರವು ಒಂದು ಬಾರಿಗೆ ಒಬ್ಬರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕನು ಒಂದು ಟೋಕನ್ ಅಥವಾ ಸ್ಮಾರ್ಟ್ಕಾರ್ಡನ್ನು ಹೊಂದಿರಲೇಬೇಕು
  • ಯಾವುದೇ ಪ್ರವೇಶ ಅಥವಾ ನಿರ್ಗಮಿಸುವಾಗ ಗೇಟ್ ದಲ್ಲಿ ಕಾರ್ಡ ಅಥವಾ ಟೊಕನ್ ತೊರಿಸದಿದ್ದಲ್ಲಿ ಇದನ್ನು MISMATCH ಎಂದು ಕರೆಯಲಾಗುತ್ತದೆ ಮತ್ತು ಇಂತಹ ಸಂಧರ್ಬದಲ್ಲಿ 10 ರೂ ದಂಡವನ್ನು ವಿಧಿಸಲಾಗುವುದು. ನಿಲ್ದಾಣವನ್ನು ಪ್ರವೇಶಿಸಿದ್ದಕ್ಕಾಗಿ ಕನಿಷ್ಟ ದರವನ್ನು ವಿದಿಸಲಾಗುವುದು.
  • ಟಿಕೇಟ್ ರಹಿತ ಪ್ರಯಾಣ ಮಾಡಿದರೆ ಅಥವಾ ಟಿಕೆಟ್ ಕಳೆದುಕೊಂಡರೆ ಗರಿಷ್ಠ ಟೋಕನ್ ದರದ ಮೊತ್ತ ಮತ್ತು ರೂ.200/- ದಂಡ ವಿಧಿಸಲಾಗುವುದು
  •  ಹೊಂದಿಕೆಯಾಗದಿರುವುದು : ಸ್ವಯಂಚಾಲಿತ ಗೇಟ್ಸ್, ಟೋಕನ್ / ಸ್ಮಾರ್ಟ್ ಕಾರ್ಡ್ನಲ್ಲಿ ಪ್ರವೇಶ / ನಿರ್ಗಮನ ವಿವರಗಳನ್ನು ದಾಖಲಿಸುತ್ತದೆ. ಈ ಗೇಟ್ಗಳಲ್ಲಿನ ಪ್ರತಿ ಪ್ರವೇಶವನ್ನು ಅದೇ ದಿನ, ಗೇಟ್ಗಳ ಮೂಲಕ ಸರಿಯಾದ ನಿರ್ಗಮನವನ್ನು ಹೊಂದಿರಬೇಕು.
  • ಟೋಕನ್ ಖರೀದಿಸಿದ 30 ನಿಮಿಷಗಳಲ್ಲಿ ಸ್ವಯಂಚಾಲಿತ ಗೇಟ್ ಮೂಲಕ ಪ್ರವೇಶವನ್ನು ಮಾಡಬೇಕು. 30 ನಿಮಿಷಗಳ ನಂತರ, ಆಡಳಿತಾತ್ಮಕ ಶುಲ್ಕ ರೂ. 5/- ಮರುಮೌಲ್ಯಮಾಪನಕ್ಕೆ ಅನ್ವಯಿಸುತ್ತದೆ.
  • ಅವಧಿ ಮೀರಿ ಉಳಿಯುವಿಕೆ ಕುರಿತು ನಿಯಮ : ಟಿಕೆಟ್ ಹೊಂದಿರುವ ಪ್ರಯಾಣಿಕರು ಅದೇ ನಿಲ್ದಾಣದ ಸಂದಾಯಿತ ಪ್ರದೇಶ (ಪೆಡ್ ಎರಿಯಾ) ದಿಂದ 20 ನಿಮಿಷಗಳ ಒಳಗೆ ಮತ್ತು ಇತರ ನಿಲ್ದಾಣಗಳ ಪಾವತಿಸಿದ ಪ್ರದೇಶದಿಂದ 120 ನಿಮಿಷಗಳ ಒಳಗೆ ನಿರ್ಗಮಿಸಬೇಕು. ಈ ಮಿತಿಗಳನ್ನು ಮೀರಿ ಹೆಚ್ಚು ತಂಗಿದ್ದಕ್ಕಾಗಿ, ಗಂಟೆಗೆ ರೂ 50 ರಂತೆ ಗರಿಷ್ಠ 100 ರೂ ದಂಡವನ್ನು ವಿಧಿಸಲಾಗುವುದು.
  • ಲಗೇಜ್ ಮಿತಿ :ಒಬ್ಬ ವ್ಯಕ್ತಿಗೆ ಗರಿಷ್ಠ 60 cm x 45 cm x 25 cm (ಉದ್ದ x ಅಗಲ x ಎತ್ತರ) ಆಯಾಮದೊಂದಿಗೆ ಒಂದು ಲಗೇಜ್ ಅನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಪ್ರಯಾಣಿಕರು ಹೆಚ್ಚುವರಿ ಲಗೇಜ್/ಹೆಚ್ಚುವರಿ ಸಾಮಾನು ಸರಂಜಾಮು ಮತ್ತು ದೊಡ್ಡ ಗಾತ್ರದ ಸಾಮಾನು ಸರಂಜಾಮುಗಳನ್ನು ಕೊಂಡೊಯ್ಯಲು ಅನುವು ಮಾಡಿಕೊಡಲು, ಪ್ರತಿ ಲಗೇಜ್ ಗೆ 30/- ರೂಪಾಯಿ ದರ ವಿಧಿಸಲಾಗುತ್ತದೆ. ಈ ಲಗೇಜ್ ಟಿಕೆಟ್ ಅನ್ನು ಕಸ್ಟಮರ್ ಕೇರ್ ಸೆಂಟರ್ (ಸಿಸಿಸಿ) ನಿಂದ ಖರೀದಿಸಬಹುದು.ಹೆಚ್ಚುವರಿ ಬ್ಯಾಗೇಜ್ಗೆ ಟಿಕೆಟ್ ಖರೀದಿಸದಿದ್ದರೆ, ರೂ .250/- ದಂಡವನ್ನು ವಿಧಿಸಲಾಗುವುದು. ಯಾವುದೇ ವಿವಾದದ ಸಂದರ್ಭದಲ್ಲಿ, ಆ ಪ್ರಯಾಣಿಕರಿಗೆ ಪ್ರಯಾಣಕ್ಕಾಗಿ ಟಿಕೆಟ್ ಹೊಂದಿದ್ದರೂ, ಮೆಟ್ರೋ ರೈಲ್ವೆ ಆಡಳಿತದ ಯಾವುದೇ ಅಧಿಕೃತ ಮೆಟ್ರೊ ರೈಲ್ವೆ ಅಧಿಕಾರಿಗಳು ಅಥವಾ ಮಟ್ರೋ ರೈಲು ಅಧಿಕಾರಿಗಳ ನೆರವಿಗೆ ಪಡೆದ ಯಾವುದೆ ವ್ಯಕ್ತಿ ರೈಲಿನಿಂದ ಹೊರಹಾಕಲು ತೆಗೆದುಹಾಕಲು ಅಧಿಕಾರ ಉಳ್ಳವರಾಗಿರುತ್ತಾರೆ.
  • ಸ್ಮಾರ್ಟ್ ಕಾರ್ಡ್ನಲ್ಲಿರುವ ಪ್ರಯಾಣ ದರ ಸಿಂದುತ್ವ ವಿಸ್ತರಣೆ : ಸ್ಮಾರ್ಟ್ ಕಾರ್ಡ್ನಲ್ಲಿನ ಸಂಗ್ರಹಿತ ಮೌಲ್ಯವು ಕೊನೆಯ ಕಾರ್ಡ್ ಟಾಪ್-ಅಪ್ ಮೌಲ್ಯದ ದಿನಾಂಕದಿಂದ ಹತ್ತು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 20/- ರೂ.ಗಳ ಆಡಳಿತಾತ್ಮಕ ಶುಲ್ಕವನ್ನು ಯಾವುದೇ ನಿಲ್ದಾಣದ ಕಸ್ಟಮರ್ ಕೇರ್ ಸೆಂಟರ್ನಲ್ಲಿ ಪಾವತಿಸುವ ಮೂಲಕ ಸಿಂಧುತ್ವ ವಿಸ್ತರಣೆಯನ್ನು ಮಾಡಬಹುದು.

 

 

Leave a Comment